Shri Prasanna Veeranjaneya Swamy Sannidhi

Shri Prasanna Veeranjaneya Swamy Sannidhi The famous temple of Lord Hanuman carved on a single monolithic rock. There are beautiful idols of g

*!! ಶ್ರೀ ರಾಮ ನವಮೀ !!**! ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇಧಸೇ !**! ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ !**ರಾಮ ನವಮೀ ಶ್ರೀ ರಾಮನ ಜನ...
25/03/2018

*!! ಶ್ರೀ ರಾಮ ನವಮೀ !!*

*! ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇಧಸೇ !*
*! ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ !*

*ರಾಮ ನವಮೀ ಶ್ರೀ ರಾಮನ ಜನ್ಮ ದಿನ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀ ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ.ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಯಾವುದು ಇಲ್ಲ, ಇದು ಸರಳವಾದ ಹಬ್ಬ.*

*ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. "ರಾಮ" "ಶ್ರೀ ರಾಮ" "ಶ್ರೀ ರಾಮ ಜಯ ರಾಮ" "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಇತ್ಯಾದಿ.*

*ಈ ರೀತಿಯಾಗಿ ನಾವು ನಾಮವನ್ನು ಜಪಿಸಬಹುದು. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ಕನಿಷ್ಠ ಪಕ್ಷ 9 ನಾಮಗಳನ್ನಾದರೂ ಬರೆಯ ಬೇಕು ಎಂದು ಹಿರಿಯರು ಹೇಳುತ್ತಾರೆ. ವಿಶೇಷವಾಗಿ ಮಕ್ಕಳೂ ಇದನ್ನು ಬರೆದರೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಕಾಯ್ದುಕೊಳ್ಳಲು ಅವರಿಗೆ ಸಹಕಾರಿಯಾಗಲಿದೆ.*

*ಉದಯಿಸುತ್ತಿರುವ ಸೂರ್ಯನಿಗೆ ಪ್ರಾರ್ಥನೆಯನ್ನು ಮಾಡುವ ಮೂಲಕ ಹಬ್ಬದ ದಿನ ಪ್ರಾರಂಭಗೊಳ್ಳುತ್ತದೆ. ರಾಮ ದೇವರ ಪೂರ್ವಜರು ಎಂದು ಸೂರ್ಯ ದೇವರನ್ನು ನಂಬುತ್ತಾರೆ. ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ರಾಮನವಮಿಯಂದು ಮುಖ್ಯವಾಗಿರುತ್ತದೆ. ರಾಮ ದೇವರ ಸ್ತೋತ್ರಗಳು, ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸುವ ಕಾರ್ಯವನ್ನು ನಾವು ಈ ದಿನ ಮಾಡಬೇಕು.*

*ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಿಸುತ್ತಾರೆ. ಆದರೆ ದಕ್ಷಿಣದಲ್ಲಿ ರಾಮ ಸೀತೆಯರ ವಿವಾಹದ ದಿನವಾಗಿಯೂ ರಾಮ ನವಮಿಯನ್ನು ಆಚರಿಸುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ.*

*!! ಜೈ ಶ್ರೀ ರಾಮ !!*

🙏🏻🌹ಬಾಳ್ಗೆ ಸಮೃದ್ಧಿಯೊಂದಿಗೆ 🌹🙏🏻*ಚೈತ್ರ ಮಾಸದ ಮಹತ್ವ - 1**ಯುಗಾದಿ ಹಬ್ಬದ ಮಹತ್ವ* ಚೈತ್ರಮಾಸಕ್ಕೆ  ವಿಷ್ಣು  ನಿಯಾಮಕ ಚೈತ್ರ ಶುಕ್ಲ ಪ್ರತಿಪತ್...
18/03/2018

🙏🏻🌹ಬಾಳ್ಗೆ ಸಮೃದ್ಧಿಯೊಂದಿಗೆ 🌹🙏🏻*ಚೈತ್ರ ಮಾಸದ ಮಹತ್ವ - 1*
*ಯುಗಾದಿ ಹಬ್ಬದ ಮಹತ್ವ*

ಚೈತ್ರಮಾಸಕ್ಕೆ ವಿಷ್ಣು ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನoದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
*ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುoದೆ ಇಟ್ಟಿರುವ ಪಂಚಾoಗ ,ತರಕಾರಿಗಳು -ಧಾನ್ಯಗಳು ,ಫಲ-ತಾoಬೂಲಗಳು ಎಣ್ಣೆ ನೆಲ್ಲಿಕಾಯಿ* *ಮುoತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು* .ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿoಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ *ಗಜೇoದ್ರ ಮೋಕ್ಷಪಾರಯಣ ಮಾಡಬೇಕು*

ಯುಗಾದಿಯಂದು ಪ್ರತಿಯೋಬ್ಬನು
ಅಭ್ಯoಜನ ಮಾಡಲೇಬೇಕು . ಈ ಮೊದಲು ಪೂಜಕನು ಸ್ನಾನ ಮಾಡಿ *ಭಗವoತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿoದ ಅಭ್ಯoಜನವನ್ನು ಮಾಡಿಸಬೇಕು . ಭಗವಂತನಿಗೆ* *ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊoಡು ನಂತರ ಸ್ನಾನ ಮಾಡಬೇಕು.*

*ಸಪ್ತಚಿರoಜೀವಿಸ್ಮರಣೆ*

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರoಜೀವಿಗಳನ್ನು ಮಾರ್ಕoಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು

ಅಶ್ವತ್ತಾಮಾ ಬಲಿರ್ವ್ಯಾಸ: ಹನೂಮಾಂಶ್ಚ ವಿಭೀಷಣ: | ಕೃಪ: ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |

ಅಭ್ಯoಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿoಬಕ ದಳ ಬಕ್ಷಣ
(ಬೇವು -ಬೆಲ್ಲ)ವನ್ನು ಮಾಡಬೇಕು

*ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮ oತ್ರ*

*ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |*

*ನೂರು ವರ್ಷಆಯುಸ್ಸು c-ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ* *ಇವುಗಳಿಗಾಗಿ ಯುಗಾದಿಯoದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು*
🙏🏻ಶುಭ ಸಂವತ್ಸರ 🙏🏻

*ಹನುಮ ನಮ್ಮ ತಾಯಿತಂದೆ  !**ಭೀಮ ನಮ್ಮ ಬಂಧು ಬಳಗ  !**ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ   ||**ತಾಯಿ ತಂದೆ ಹಸುಳೆಗಾಗಿ**ಸಹಾಯ ಮಾಡಿ ಸಾಕುವಂ...
01/12/2017

*ಹನುಮ ನಮ್ಮ ತಾಯಿತಂದೆ !*
*ಭೀಮ ನಮ್ಮ ಬಂಧು ಬಳಗ !*
*ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||*

*ತಾಯಿ ತಂದೆ ಹಸುಳೆಗಾಗಿ*
*ಸಹಾಯ ಮಾಡಿ ಸಾಕುವಂತೆ !*
*ಆಯಾಸವಿಲ್ಲದೆ ಸಂಜೀವನವ ತಂದೆ !*
*ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ*
*ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾ ಯುಗದಿ ||*

*ಬಂಧುಬಳಗದಂತೆ ಆಪದ್ಬಾಂಧವನಾಗಿ*
*ಪಾರ್ಥನಿಗೆ ಬಂದ ದುರಿತಗಳ ಪರಿಹರಿಸಿ*
*ಅಂಧಕ ಜಾತರ ಕೊಂದು ನಂದ ಕಂದಾರ್ಪಣೆಂದ*
*ಗೋವಿಂದನಂಘ್ರಿಗಳೆ ಸಾಕ್ಶಿ ದ್ವಾಪರ ಯುಗದಿ ||*

*ಗತಿ ಗೋತ್ರರಂತೆ ಸಾಧುಯತಿಗಳಿಗೆ ಮತಿಯ ತೋರಿ*
*ಮತಿ ಕೆಟ್ಟ ಇಪ್ಪತ್ಥ ಒಂದು ಮತವ ಖಂಡಿಸಿ*
*ಗತಿಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ*
*ಗತಿ ಪುರಂದರ ವಿಠ್ಠಲನೆ ಸಾಕ್ಷಿ ಕಲಿಯುಗದಲ್ಲಿ ||*

*ಹನುಮ ನಮ್ಮ ತಾಯಿತಂದೆ !*
*ಭೀಮ ನಮ್ಮ ಬಂಧು ಬಳಗ !*
*ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ !!*

*" ಶ್ರೀ ಪುರಂದರ ದಾಸರು "*

Superb old painting. When you look at Vishnu, he'll be riding elephant. If you pay attention to Siva, elephant becomes N...
05/10/2017

Superb old painting. When you look at Vishnu, he'll be riding elephant. If you pay attention to Siva, elephant becomes Nandi..

Ramayana Stamp released by the Indian Govt
23/09/2017

Ramayana Stamp released by the Indian Govt

Sri Krishna Janmashthami Shubhashayagalu...
14/08/2017

Sri Krishna Janmashthami Shubhashayagalu...

*ಯಾದವ ನೀಬಾ ಯದುಕುಲ ನಂದನ ಮಾಧವ ಮಧುಸೂಧನ ಬಾರೋ|**ಸೋದರಮಾವನ ಮಧುರೆಲಿ ಮಡಹಿದ ಯಶೋದೆ ಕಂದಾ ನೀ ಬಾರೊ|*ಕಣಕಾಲಂದುಗೆ ಘಲು ಘಲುರೆನುತಲಿ ಝಣ ಝಣ ವೇ...
11/08/2017

*ಯಾದವ ನೀಬಾ ಯದುಕುಲ ನಂದನ ಮಾಧವ ಮಧುಸೂಧನ ಬಾರೋ|*

*ಸೋದರಮಾವನ ಮಧುರೆಲಿ ಮಡಹಿದ ಯಶೋದೆ ಕಂದಾ ನೀ ಬಾರೊ|*

ಕಣಕಾಲಂದುಗೆ ಘಲು ಘಲುರೆನುತಲಿ ಝಣ ಝಣ ವೇಣುನಿನಾದದಲಿ|
ಚಿಣಿಕೋಲು ಚೆಂಡು ಬುಗುರಿಯನಾಡುತ ಸಣ್ಣ ಸಣ್ಣ ಗೋವಳರೊಡಗೂಡಿ||

ಶಂಖಚಕ್ರವೂ ಕೈಯಲಿ ಪೊಳೆಯುತ ಬಿಂಕದ ಗೋವಳ ನೀ ಬಾರೋ|
ಅಕಳಂಕ ಮಹಿಮನೆ ಆದಿನಾರಾಯಣ ಬೇಕೆಂಬ ಭಕ್ತರಿಗೊಲಿ ಬಾರೋ||

ಖಗ ವಾಹನನೇ ಬಗೆ ಬಗೆ ರೂಪನೆ ನಗೆಮೊಗದರಸನೆ ನೀ ಬಾರೋ|
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರ ವಿಠಲ ನೀ ಬಾರೋ||

*ಯಾದವ ನೀಬಾ ಯದುಕುಲ ನಂದನ ಮಾಧವ*

*"ಶ್ರೀ ಪುರಂದರ ದಾಸರು"*

Sri Varamahalakshmi Habbada Shubhashayagalu.Wishes on occasion of Sri Varamahalakshmi Vrata...
04/08/2017

Sri Varamahalakshmi Habbada Shubhashayagalu.
Wishes on occasion of Sri Varamahalakshmi Vrata...

09/07/2017

Address

Bangalore
560086

Opening Hours

Monday 7am - 8:30pm
Tuesday 7am - 8:30pm
Wednesday 7am - 8:30pm
Thursday 7am - 8:30pm
Friday 7am - 8:30pm
Saturday 7am - 8:30pm
Sunday 7am - 8:30pm

Website

Alerts

Be the first to know and let us send you an email when Shri Prasanna Veeranjaneya Swamy Sannidhi posts news and promotions. Your email address will not be used for any other purpose, and you can unsubscribe at any time.

Share