01/02/2021
ಇದು ಗದ್ದೆಯಲ್ಲ; ರಸ್ತೆ!
ಚುನಾವಣೆ ಬಂದು ಹೋಗಿಯೂ ದುರಸ್ತಿ ಕಾಣದ ಅಳಕೆಮಜಲು ಮಾರ್ಗ ....!
ಜನವಸತಿ ಪ್ರದೇಶವೊಂದಕ್ಕೆ ಹೋಗುವ ದಾರಿ ಇಷ್ಟು ಕಳಪೆಯಾದದ್ದು ಯಾಕೆ?
Chief Minister of Karnataka
BS Yediyurappa
R Ashoka
Nalin Kumar Kateel
Kota Shrinivas Poojari
Angara Sullia
Sanjeeva matandoor
ಈ (0:26)
ವಿಡಿಯೋ ನೋಡಿ..
ಕಬಕ-ವಿಟ್ಲ ಮಾರ್ಗ ಮಧ್ಯೆ ಇರುವ ಇಡ್ಕಿದು ಗ್ರಾಮದ ಅಳಕೆಮಜಲು ಎಂಬ ಊರಿನ ಶಾರದಾಂಬ ಬಜನಾಮಂದಿರ ದ ಪಕ್ಕದಿಂದ ಕೋಲ್ಪೆಗೆ ಹೋಗುವ ದಾರಿ ಇದು.
ರಸ್ತೆಯ ಡಾಮಾರುಗಳೆಲ್ಲ ಕಿತ್ತು ಹೋಗಿ ವರ್ಷಗಳೇ ಸಂದಿವೆ. ಪರಿಸರ ಇಡೀ ಧೂಳುಮಯವಾಗಿದೆ. ಇದೇ ರಸ್ತೆಯ ಪಕ್ಕದಲ್ಲೇ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಇದೆ. ಜನವಸತಿ ಪ್ರದೇಶಕ್ಕೆ ಹೋಗುವ ರಸ್ತೆಯೊಂದು ಇಷ್ಟು ಕಳಪೆಯಾಗಿರಲು ಸಾಧ್ಯವೇ? ಎಂದು ನೀವು ಅಚ್ಚರಿಯಾಗಬಹುದು. ಹೌದು. ಇಲ್ಲಿನ ಸ್ಥಳೀಯಾಡಳಿತ ಗಾಢ ನಿದ್ರೆಯಲ್ಲಿದೆ.
ಕಳೆದ ಗ್ರಾಮಪಂಚಾಯತ್ ಚುನಾವಣೆ ಹತ್ತಿರ ಬಂದಾಗ; ರಾಜ್ಯಾದ್ಯಂತ ಹಲವಾರು ಹಳ್ಳಿಗಳ ಒಳರಸ್ತೆಗಳು ಕಾಂಕ್ರೀಟ್ ಕಂಡಿವೆ. ಜನಪ್ರತಿನಿಧಿಗಳು ಆ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ್ದರು ಕೂಡ.
ಆದರೆ ಇಡ್ಕಿದು-ಅಳಕೆಮಜಲಿನ ಜನಪ್ರತಿನಿಧಿಗಳ ಉಢಾಪೆ/ಉದಾಸೀನವು ಉಚ್ಛ್ರಾಯ ಸ್ಥಿತಿಯಲ್ಲಿದೆ ಎನ್ನಲು ಈ ರಸ್ತೆಯೇ ಸಾಕ್ಷಿ ಸಾಕು!
ಗ್ರಾಮಪಂಚಾಯತ್ ನ ಹೊಸ ಆಡಳಿತವು ಈ ಬಗ್ಗೆ ತಕ್ಷಣ ಮುತುವರ್ಜಿ ವಹಿಸದೇ ಇದ್ರೆ ಮುಂಬರುವ ತಾಲೂಕು-ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇಲ್ಲಿನ ಮತದಾರರು ಗ್ರಾ.ಪಂ.ಸದಸ್ಯರಿಗೆ ಮಂಗಳಾರತಿ ಮಾಡುವುದು ಖಚಿತ!
ನಾಗರಿಕರು
ಅಳಕೆ ಮಜಲು